``ಪ್ರದರ್ಶನ, ಪ್ರಸಾರ, ಪ್ರಚಾರದಿಂದ ಮಾತ್ರ ಯಕ್ಷಗಾನ ಉಳಿಯಲು ಸಾಧ್ಯ`` : ಸಾಮಗ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಸೆಪ್ಟೆ೦ಬರ್ 22 , 2013
|
ಸೆಪ್ಟೆ೦ಬರ್ 22 , 2013
|
``ಪ್ರದರ್ಶನ, ಪ್ರಸಾರ, ಪ್ರಚಾರದಿಂದ ಮಾತ್ರ ಯಕ್ಷಗಾನ ಉಳಿಯಲು ಸಾಧ್ಯ`` : ಸಾಮಗ
ಉಡುಪಿ :
ಯಕ್ಷಗಾನ ಮಿಮರ್ಶಗೆ ಒಳಗಾದ ಜೀವಂತ ಕಲೆಯಾಗಿದ್ದು, ಇದಕ್ಕೆ ಪ್ರದರ್ಶನ, ಪ್ರಸಾರ ಹಾಗೂ ಪ್ರಚಾರ ಅಗತ್ಯ. ಆಗ ಮಾತ್ರ ಯಕ್ಷಗಾನ ಕಲೆಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಅಭಿಪ್ರಾಯಪಟ್ಟರು.
ಶ್ರೀಕೃಷ್ಣ ಮಠ ಹಾಗೂ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ನಡೆದ ಶಿವಮೊಗ್ಗ ನಾಟ್ಯಶ್ರೀ ಕಲಾ ತಂಡ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಹಾಗೂ ಯಕ್ಷೋತ್ಸವ 2013 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪರ್ಯಾಯ ಶ್ರೀಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮಾರಂಭ ಉದ್ಘಾಟಿಸಿ ಶುಭಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆ ಮಾತನಾಡಿದರು. ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾವ್, ಸಾಂಸ್ಕೃತಿಕ ಚಿಂತಕ ಹಾಗೂ ಕಲಾವಿದ ಮೋಹನ್ ಹೆಗಡೆ, ಶೃಂಗೇರಿಯ ದಿ. ಕಾಳಿಂಗ ನಾವುಡ ಪ್ರತಿಷ್ಠಾನದ ಸಂಸ್ಥಾಪಕ ರಮೇಶ್ ಬೇಗಾರು ಇದ್ದರು.
ವಿದ್ವಾನ್ ವೇದಮೂರ್ತಿ ಭಟ್ ಸ್ವಾಗತಿಸಿ, ಜಿ.ಪಿ. ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು.
|
|
|